ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ, ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ, ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ.
— ಬಸವಣ್ಣ, ವಚನ
VV ka Vichar:
ಕದಿಯದಿರು, ಕೊಲ್ಲದಿರು, ಸುಳ್ಳು ಹೇಳದಿರು, ಸಿಟ್ಟಾಗದಿರು, ಇತರರನ್ನು ದ್ವೇಷಿಸದಿರು, ತನ್ನನ್ನು ತಾನೇ ಹೊಗಳಿಕೊಳ್ಳದಿರು, ಬೇರೆಯವರನ್ನು ನಿಂದಿಸದಿರು ಎಂದು ಬಸವಣ್ಣ ಸರಳ ನೀತಿಸೂತ್ರಗಳನ್ನು ಹೇಳುತ್ತಾರೆ. ಇವೇ ಮನಸ್ಸಿನ ಒಳ ಮತ್ತು ಹೊರಗಿನ ಶುದ್ಧತೆ. ಪ್ರಾಮಾಣಿಕ ನಡತೆಯೇ ದೈವಪ್ರೀತಿಯನ್ನು ಗಳಿಸುವ ದಾರಿ.
