ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ.
— ಡಿ.ವಿ.ಗುಂಡಪ್ಪ, ಮಂಕುತಿಮ್ಮನ ಕಗ್ಗ
VV ka Vichar:
ಬೆಟ್ಟದ ಬುಡದಲ್ಲಿ ಹುಲ್ಲಿನಂತೆ ವಿನಮ್ರವಾಗಿರು, ಮನೆಗೆ ಮಲ್ಲಿಗೆಯಂತೆ ಘಮಿಸು, ಕಷ್ಟಗಳ ಮಳೆ ಸುರಿದಾಗ ಕಲ್ಲಿನಂತೆ ಗಟ್ಟಿಯಾಗಿ ನಿಲ್ಲು, ದುರ್ಬಲರಿಗೆ ಬೆಲ್ಲ ಸಕ್ಕರೆಯಂತೆ ಸಿಹಿಯಾಗು ಎಂದು ಡಿ.ವಿ.ಜಿ. ಹೇಳುತ್ತಾರೆ. ಎಲ್ಲರೊಂದಿಗೆ ಬೆರೆತು ಸಮಚಿತ್ತದಿಂದ ಬಾಳುವುದೇ ನಿಜವಾದ ಜೀವನಕಲೆ.
