ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು, ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯಾ.
— ಬಸವಣ್ಣ, ವಚನ
VV ka Vichar:
ಮಾತನಾಡಿದರೆ ಮುತ್ತಿನ ಹಾರದಂತೆ, ಮಾಣಿಕ್ಯದ ಕಾಂತಿಯಂತೆ ಶುದ್ಧವಾಗಿ ಮತ್ತು ಬೆಲೆಬಾಳುವಂತಿರಬೇಕು ಎನ್ನುತ್ತಾರೆ ಬಸವಣ್ಣ. ಆದರೆ ಆಡಿದ ಮಾತಿನಂತೆ ನಡೆಯದಿದ್ದರೆ ಆ ಮಾತಿಗೆ ಬೆಲೆಯೇ ಇಲ್ಲ. ನುಡಿ ಮತ್ತು ನಡೆ ಒಂದಾಗಿರುವುದೇ ನಿಜವಾದ ಸತ್ಯನಿಷ್ಠೆ.
